ಅಣ್ಣಿಗೇರಿ ದೇವರ ಹುಂಡಿಯನ್ನು ಒಡೆದು ಹಣ ದೋಚಿದ ಕಳ್ಳರು .


ಧಾರವಾಡ ಜಿಲ್ಲೆ ಅಣ್ಣಿಗೇರಿಯಲ್ಲಿ ಇಂದು ಬೆಳಗಿನ ಜಾವ ಮಾರ್ಕೇಟಿನಲ್ಲಿರುವ 
ಪುರಾತನ ಜೈನ ಮಂದಿರ ದೇವಾಲಯದ ಮಾಳಗಿ ಮೇಲಿನ ಕದದ ಚಿಲಕವನ್ನು ಮುರಿದು 
ಒಳನುಗ್ಗಿ ಹುಂಡಿಯಲ್ಲಿದ್ದ ಹಣವನ್ನು ದೋಚಿಕೊಂಡು ಹೋದ ಘಟನೆ ನಡೆದಿದೆ .
 ಎಂದಿನಂತೆ ಬಾಗಿಲು ತೆಗೆದು ಪೂಜೆ ಮಾಡಲು ಹೋದ ಅರ್ಚಕರಿಗೆ 
ಒಡೆದ ಹುಂಡಿಯನ್ನು ನೋಡಿ ಭಯದಿಂದ ಗಾಬರಿಗೊಂಡು 
ಸ್ಥಳೀಯ ಆರಕ್ಷಕ ಠಾಣೆಗೆ ತಿಳಿಸಿದ್ದು .
ದೌಡಾಯಿಸಿ ಬಂದ ಪೊಲೀಸರು .ಪರಶೀಲೆನೆ ಮಾಡಿದಾಗ 2.ಹುಂಡಿಯಲ್ಲಿ   ಅಂದಾಜು 1ಲಕ್ಷಕ್ಕೂ ಅಧಿಕ ಹೆಚ್ಚು ಹಣವನ್ನು ಕದ್ದೊಯ್ದಿರುವುದು ಗೊತ್ತಾಗಿದೆ . ಅಲ್ಲದೆ 
2-3 ದಿನದ ಹಿಂದೆ 
ಅದೇ ಮಾರ್ಕೆಟ್ಟಿನ 2.ಕಿರಾಣಿ ಅಂಗಡಿಗಳ 
ಕಿಟಕಿ ಬಾಗಿಲು ಮುರಿದು 
 ಅಂಗಡಿಯಲ್ಲಿದ್ದ ಇಪ್ಪತ್ತು ಸಾವಿರಕ್ಕೂ ಹೆಚ್ಚು ಹಣವನ್ನು ಕದ್ದೊಯ್ದಿದ್ದಾರೆ . 
ಮತ್ತು ಪೊಲೀಸರು ಇದನ್ನು ಸರಿಯಾಗಿ ಪರಿಶೀಲನೆ ಮಾಡಿ 
ಕಳ್ಳರನ್ನು ಬಂಧಿಸ ಬೇಕೆಂದು ಹೇಳಿದರು .
ಮತ್ತು ಮಾರ್ಕೆಟಿನಲ್ಲಿ 
ಸಿಸಿ ಕ್ಯಾಮೆರಾ ಅಳವಡಿಸಬೇಕೆಂದು 
ವರ್ತಕ ಸಂಘದ ಅಧ್ಯಕ್ಷರಾದ ಮಹಾಬಲೇಶ್ವರ ಹೆಬಸೂರು ಹೇಳಿದರು .

ವರದಿ :
ಕಿರಣ್ ಪೂಜಾರ 
ಅಣ್ಣಿಗೇರಿ

Post a Comment

0 Comments