ಸಾಗರ: ತಾಲೂಕಿನ ಪ್ರತಿಷ್ಠಿತ ಸಂಸ್ಥೆಯಾಗಿರುವ ಸಾಗರ ತಾಲ್ಲೂಕು ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷರಾಗಿ ಸಾಗರದ ಸಾಗರ ಸುತ್ತ ಪತ್ರಿಕೆಯ ಸಂಪಾದಕರಾದ ಜಿ.ನಾಗೇಶ್ ಅವರು ಅವಿರೋಧವಾಗಿ ಪುನರಾಯ್ಕೆ ಆಗಿದ್ದು ಅವರ ಕಾರ್ಯ ತತ್ಪರತೆ ಗೆ ಸಂದ ಗೌರವವಾಗಿದೆ.
ಕಳೆದ ಅವಧಿಯಲ್ಲಿ ಪತ್ರಕರ್ತರ ಸಂಘದಲ್ಲಿ ಕ್ರಿಯಾಶೀಲವಾಗಿ ಕೆಲಸ ಮಾಡಿದ್ದಾರೆ, ಪತ್ರಿಕಾ ಭವನದ ಅಭಿವೃದ್ಧಿಗೆ ಶ್ರಮಿಸಿದ್ದಾರೆ.
ಲೇಖಕರು ಆಗಿರುವ ನಾಗೇಶ್ ಈಗಾಗಲೇ 15ಕ್ಕೂ ಹೆಚ್ಚು ಕೃತಿಗಳನ್ನು ರಚಿಸಿದ್ದಾರೆ, ಪತ್ರಿಕೋದ್ಯಮದಲ್ಲಿ ನಿರಂತರವಾಗಿ ತೊಡಗಿಸಿಕೊಂಡು ಬಂದಿದ್ದು ಹಲವು ಸಂಘಟನೆಗಳಲ್ಲಿ ತಮ್ಮನ್ನು ತಾವು ಸಮರ್ಪಿಸಿಕೊಂಡು ಬಂದವರಾಗಿದ್ದಾರೆ ಜಿಲ್ಲೆ ರಾಜ್ಯ ಮಟ್ಟದ ಹಲವಾರು ಪತ್ರಿಕೆಗಳಲ್ಲಿ ಲೇಖನಗಳನ್ನು ಪ್ರಕಟಿಸುತ್ತಿರುವ ಇವರು.ಸಾಗರ ತಾಲ್ಲೂಕು ಕನ್ನಡ ಸಾಹಿತ್ಯ ಪರಿಷತ್ತಿನ ಕಾರ್ಯದರ್ಶಿಯಾಗಿಯೂ ಕಾರ್ಯನಿರ್ವಹಿಸುತ್ತಿದ್ದಾರೆ ಸಾಗರ ತಾಲೂಕು ಪತ್ರಕರ್ತರ ಸಂಘದ ಅಧ್ಯಕ್ಷರಾಗಿ ಪುನರಾಯ್ಕೆ ಆಗಿರುವ ಶ್ರೀ ಜಿ ನಾಗೇಶ್ ಅವರಿಗೆ ಮಂದಾರ ನ್ಯೂಸ್ ಮತ್ತು ಜನ ಆಕ್ರೋಶ ಪತ್ರಿಕಾ ಬಳಗದಿಂದ ಹೃದಯಾ ಪೂರ್ವಕ ಅಭಿನಂದನೆಗಳು.
ಪ್ರಕಾಶ್ ಮಂದಾರ
ಸಂಪಾದಕರು.
0 Comments