ಹರಿಹರೇಶ್ವರ ದೇವಸ್ಥಾನದಲ್ಲಿ 8 ನೇ ಅಂತರಾಷ್ಟ್ರೀಯ ಯೋಗ ದಿನಾಚರಣೆ.!!!

ಹರಿಹರ:ಜಿಲ್ಲಾಡಳಿತ ಹಾಗೂ ಜಿಲ್ಲಾ ಪಂಚಾಯತ್,ಜಿಲ್ಲಾ ಆಯುಷ್ ಇಲಾಖೆ,ಭಾರತೀಯ ಪುರಾತತ್ವ ಇಲಾಖೆ,ದಾವಣಗೆರೆ. ತಾಲ್ಲೂಕಾಡಳಿತ,ಧನ್ವಂತರಿ ಪತಂಜಲಿ ಆರೋಗ್ಯ ಕೇಂದ್ರ, ಸಪ್ತರ್ಷಿ ಯೋಗ ಸ್ಪೋರ್ಟ್ಸ್ ಅಕಾಡೆಮಿ,ಹರಿಹರ.ತಪೋವನ ಯೋಗ ಮತ್ತು ಪ್ರಕೃತಿ ಚಿಕಿತ್ಸಾ ಮೆಡಿಕಲ್ ಕಾಲೇಜ್ ಮತ್ತು ಆಸ್ಪತ್ರೆ ದಾವಣಗೆರೆ ಇವರುಗಳ ಸಂಯುಕ್ತಾಶ್ರಯದಲ್ಲಿ 8 ನೇ ಅಂತಾರಾಷ್ಟ್ರೀಯ ಯೋಗ ದಿನಾಚರಣೆಯನ್ನು "ಮಾನವೀಯತೆಗಾಗಿ ಯೋಗ" ಎಂಬ ಘೋಷವಾಕ್ಯದೊಂದಿಗೆ ಇಂದು ಬೆಳಗ್ಗೆ 5.30 ಕ್ಕೆ ಐತಿಹಾಸಿಕ ಪಾರಂಪರಿಕ ಕ್ಷೇತ್ರವಾದ ಹರಿಹರೇಶ್ವರ ದೇವಸ್ಥಾನದಲ್ಲಿ ಹಮ್ಮಿಕೊಳ್ಳಲಾಗಿತ್ತು.
ಕಾರ್ಯಕ್ರಮದ ಉದ್ಘಾಟನೆಯನ್ನು ಹಾಲಿ ಶಾಸಕ ಎಸ್ ರಾಮಪ್ಪ ,ತಪೋವನದ ಚೇರ್ಮ್ಯಾನ್ ಡಾ॥ಶಶಿಕುಮಾರ್ ಮೆರವಾಡೆ,ಸಸಿಗೆ ನೀರೆರೆಯುವ ಮೂಲಕ ಕಾರ್ಯಕ್ರಮವನ್ನು ಉದ್ಘಾಟಿಸಿದರು.  

ಹರಿಹರದ ಶಾಸಕ ಎಸ್ ರಾಮಪ್ಪ ನವರು ಅಧ್ಯಕ್ಷತೆ ವಹಿಸಿದ್ದರು.ಮುಖ್ಯ ಅತಿಥಿಗಳಾಗಿ ನಗರಸಭೆ ಸದಸ್ಯರಾದ ಶ್ರೀಮತಿ ಶಾಹಿನಾಬಾನು ದಾದಪೀರ್,ಉಪಾಧ್ಯಕ್ಷೆ ವಾಮನಮೂರ್ತಿ,ತಪೋವನ ಯೋಗ ಮತ್ತು ಪ್ರಕೃತಿ ಚಿಕಿತ್ಸಾ ಮೆಡಿಕಲ್ ಕಾಲೇಜ್ ಮತ್ತು ಆಸ್ಪತ್ರೆಯ ಚೇರ್ ಮನ್ ಡಾ॥ ಶಶಿಕುಮಾರ್ ಮೆಹರವಾಡೆ,ವಿಶೇಷ ಆಹ್ವಾನಿತರಾಗಿ ಹರಿಹರದ ಮಾಜಿ ಶಾಸಕ ಬಿಪಿ ಹರೀಶ್,ಬಿಜೆಪಿ ಜಿಲ್ಲಾ ಅಧ್ಯಕ್ಷ ವೀರೇಶ್ ಹನಗವಾಡಿ,ಉಪಸ್ಥಿತರಿದ್ದರು.
 
ಧ್ಯಾನ :5:30 ರಿಂದ 6 ಗಂಟೆಯವರೆಗೆ,
ವೇದಿಕೆ ಕಾರ್ಯಕ್ರಮ:6 ರಿಂದ 6:55 ರವರೆಗೆ.
ಯೇೂಗ ಕಾರ್ಯಕ್ರಮ :7 ರಿಂದ 7:35 ರವರೆಗೆ.
ಸನ್ಮಾನ ಕಾರ್ಯಕ್ರಮ 7:40 ರಿಂದ ನಡೆಯಿತು.

ತಪೋವನ ಪ್ರಕೃತಿ ಮತ್ತು ಆಯುರ್ವೇದಿಕ್ ಮೆಡಿಕಲ್ ಕಾಲೇಜು ವತಿಯಿಂದ ಶಾಸಕರು ಸೇರಿದಂತೆ ಮುಖ್ಯ ಅತಿಥಿಗಳಿಗೆ ಗೌರವಿಸಿ ಸನ್ಮಾನಿಸಲಾಯಿತು.

ಎಲ್ಲಾ ಯೋಗಾಸಕ್ತರಿಗೆ ಲಘು ಉಪಾಹಾರದ ವ್ಯವಸ್ಥೆಯನ್ನು ತಪೋವನದ ಸಂಸ್ಥೆಯಿಂದ ಮಾಡಲಾಗಿತ್ತು.

ಈ ಕಾರ್ಯಕ್ರಮದಲ್ಲಿ ಹರಿಹರದ ಎಲ್ಲಾ ಇಲಾಖೆಯ ಮುಖ್ಯಸ್ಥರು ಹಾಗೂ ಸಿಬ್ಬಂದಿ ವರ್ಗ ,ಹರಿಹರದ ಎಲ್ಲಾ ಯೋಗಾಸಕ್ತರು, ಸಾರ್ವಜನಿಕರು ವಿವಿಧ ಸಂಘ ಸಂಸ್ಥೆಗಳು,ಅಧ್ಯಕ್ಷರು ಪದಾಧಿಕಾರಿಗಳು ಹಾಗೂ ನಿರ್ದೇಶಕರು  ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಂಘ ಹರಿಹರ.ಹರಿಹರ ತಾಲ್ಲೂಕಿನ ಎಲ್ಲಾ ಆಯುಷ್ ವೈದ್ಯಾಧಿಕಾರಿಗಳು ಹಾಗೂ ಚಿಗಟೇರಿ ಜಿಲ್ಲಾ ಸಾರ್ವಜನಿಕ ಆಸ್ಪತ್ರೆ ಆಯುಷ್ ವಿಭಾಗದ ಎಲ್ಲ ವೈದ್ಯಾಧಿಕಾರಿಗಳು ಮತ್ತು ಸಿಬ್ಬಂದಿ ವರ್ಗ ಇಂದಿನ ಅಂತಾರಾಷ್ಟ್ರೀಯ ಯೋಗ ದಿನಾಚರಣೆ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು.

Post a Comment

0 Comments