ಲಂಚ ಸ್ವೀಕರಿಸುತ್ತಿದ್ದ ಅಧಿಕಾರಿಗಳಿಬ್ಬರು ಲೋಕಾಯುಕ್ತ ಬಲೆಗೆ.!!


ದಾವಣಗೆರೆ: ಭೂಸ್ವಾಧೀನದ ಪರಿಹಾರ ನೀಡಲು ಲಂಚ ಸ್ವೀಕರಿಸುತ್ತಿದ್ದ ಕರ್ನಾಟಕ ಕೈಗಾರಿಕಾ ಪ್ರದೇಶಾಭಿವೃದ್ಧಿ ಮಂಡಳಿ ದಾವಣಗೆರೆ ವಲಯ ಕಚೇರಿಯ ವಿಶೇಷ ಭೂ ಸ್ವಾಧೀನಾಅಧಿಕಾರಿ ಮತ್ತು ಶಿರಸ್ತೆದಾರ ಶುಕ್ರವಾರ ಲೋಕಾಯುಕ್ತರ ಬಳಿಗೆ ಬಿಟ್ಟಿದ್ದಾರೆ. ವಿಶೇಷ ಭೂ ಸ್ವಾಧೀನಾಧಿಕಾರಿ, ಹಿರಿಯ ಕೆ.ಎ.ಎಸ್ ಅಧಿಕಾರಿ ಜಿ.ಡಿ ಶೇಖರ್ ಮತ್ತು ಶಿರಸ್ತೇದಾರ್ ವಿ.ಎ. ಶ್ರೀನಿವಾಸ್ ಲೋಕಾಯುಕ್ತರಿಗೆ ಬಲೆಗೆ ಬಿದ್ದ ತಿಮಿಂಗಳಗಳು.

ಜಿಲ್ಲಾಡಳಿತ ಭವನದಲ್ಲಿರುವ ಕಚೇರಿಯಲ್ಲಿ ಹಾವೇರಿ ತಾಲೂಕಿನ ಕೋಳೊರ ಗ್ರಾಮದ ಸಂತೋಷ್ ಗುಡ್ಡಪ್ಪನವರ್ ಎಂಬುರಿಂದ ಮೂವತ್ತು ಸಾವಿರ ರೂಪಾಯಿ ಲಂಚ ಪಡೆಯುತ್ತಿರುವ ಸಂದರ್ಭದಲ್ಲಿ ದಾಳಿ ನಡೆಸಿದ ಲೋಕಾಯುಕ್ತ ಪೊಲೀಸರು ಇಬ್ಬರನ್ನ ವಶಕ್ಕೆ ತೆಗೆದುಕೊಂಡಿದ್ದಾರೆ.

ಸರ್ಕಾರದ ಯೋಜನೆಗೆಂದು ಕೋಳೊರ ಗ್ರಾಮದ ಸಂತೋಷ್ ಗುಡ್ಡಪ್ಪನವರ ಭೂಮಿಯನ್ನು ಸ್ವಾಧೀನ ಪಡಿಸಿಕೊಳ್ಳಲಾಗಿದ್ದು ಪರಿಹಾರಕ್ಕೆ ಇಬ್ಬರು ಮೂವತ್ತು ಸಾವಿರ ರೂಪಾಯಿ ಲಂಚಕ್ಕೆ ಬೇಡಿಕೆ ಇಟ್ಟಿದ್ದರು ಈ ಬಗ್ಗೆ ಸಂತೋಷ್ ಗುಡ್ಡಪ್ಪನವರು ಲೋಕಾಯುಕ್ತರಿಗೆ ದೂರು ಸಲ್ಲಿಸಿದ್ದರು.

ದಾವಣಗೆರೆ ಲೋಕಾಯುಕ್ತ ಎಸ್ಪಿ ಎಂ.ಎಸ್. ಕೌಲಾಪುರೆ ನೇತೃತ್ವದಲ್ಲಿ ಡಿವೈಎಸ್ಪಿ ಕೆ.ಜಿ ರಾಮಕೃಷ್ಣ, ಇನ್ಸ್ಪೆಕ್ಟರ್ ಹೆಚ್ ಎಸ್ ರಾಷ್ಟ್ರಪತಿ, ಎನ್.ಹೆಚ್ ಆಂಜನೇಯ ಅವರನ್ನೊಳಗೊಂಡ ತಂಡ ದಾಳಿ ನಡೆಸಿ ಇಬ್ಬರು ಅಧಿಕಾರಿಗಳನ್ನು ಬಲೆಗೆ ಬೆಳೆಸುವಲ್ಲಿ ಯಶಸ್ವಿಯಾಗಿದ್ದಾರೆ.

Post a Comment

0 Comments