ಮುಂಬರುವ ವಿಧಾನಸಭಾ ಚುನಾವಣೆಯ ನಂತರ ಯಾವುದೇ ಸಮ್ಮಿಶ್ರ ಸರ್ಕಾರ ಬರುವುದಿಲ್ಲ. ಒಂದೇ ಪಕ್ಷ ಅಧಿಕಾರಕ್ಕೆ ಬರಲಿದೆ ಎಂದು ಕೋಡಿಮಠ ಮಹಾಸಂಸ್ಥಾನದ ಪೀಠಾಧ್ಯಕ್ಷ ಶಿವಾನಂದ ಶಿವಯೋಗಿ ರಾಜೇಂದ್ರ ಸ್ವಾಮೀಜಿ ಭವಿಷ್ಯ ನುಡಿದಿದ್ದಾರೆ.
ಹೊಸಪೇಟೆ ನಗರದಲ್ಲಿ ಶುಕ್ರವಾರ ಬಿಜೆಪಿ ನಾಯಕಿ ರಾಣಿ ಸಂಯುಕ್ತ ಅವರ ಮನೆಗೆ ಭೇಟಿ ನೀಡಿದಾಗ ಪತ್ರಕರ್ತರೊಂದಿಗೆ ಅವರು ಮಾತನಾಡಿದರು.
ಸಂಕ್ರಾಂತಿ ಯುಗಾದಿ ಬಳಿಕ ಮತ್ತೆ ಭಾರಿ ಮಳೆ ಆಗುತ್ತದೆ. ಜಾಗತಿಕ ಸಮಸ್ಯೆ ತಲೆದೋರುತ್ತದೆ, ಒಲೆಹೊತ್ತಿ ಉರಿದೊಡೆ ನಿಲ್ಲಬಹುದು, ಧರೆಯತ್ತಿ ಉರಿದೊಡೆ ನಿಲ್ಲಬಹುದೆ.? ಇಂತಹ ಸಂದರ್ಭ 2023ರಲ್ಲಿ ಜಗತ್ತಿಗೆ ಆವರಿಸುತ್ತದೆ. ಇದರಿಂದಾಗಿ ಎರಡು ಮೂರು ಬಹುದೊಡ್ಡ ತಲೆಗಳು ಉರುಳುತ್ತವೆ ಸಾಧು- ಸಂತರಿಗೆ ತೊಂದರೆ ಇದೆ ಭವಿಷ್ಯ ನುಡಿದರು. ಸಂಕ್ರಾಂತಿ ಫಲ ಹೇಳುವುದಕ್ಕೆ ಒಂದು ದಿನ ಬಾಕಿ ಇದೆ. ಇದು ಕಳೆಯದೆ ಭವಿಷ್ಯ ಹೇಳಲಾಗದು ಎಂದು ಸ್ವಾಮೀಜಿ ನುಡಿದರು.
0 Comments