ಮಲೇಬೆನ್ನೂರು ಪೊಲೀಸರಿಂದ ಮಿಂಚಿನ ಕಾರ್ಯಾಚರಣೆ, ಟ್ರೈಲರ್ ಹಾಗೂ ತೇಗದ ಮರ ಕಳ್ಳರ ಬಂಧನ.!!


ಹರಿಹರ ತಾಲೂಕು ಮೇಲೆಬೆನ್ನೂರು ಮಿಂಚಿನ ಕಾರ್ಯಾಚರಣೆ ನಡೆಸಿ ರೈತರ ಟ್ರೈಲರ್ ಮತ್ತು ತೇಗದ ಮರವನ್ನ ಕಳ್ಳತನ ಮಾಡುತ್ತಿದ್ದ ಕಳ್ಳರನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.

ದಿನಾಂಕ 13 4 2023 ರಂದು ಸರಿಸುಮಾರು ರಾತ್ರಿ ಒಂಬತ್ತು ಗಂಟೆಯ ಸಮಯದಲ್ಲಿ ಪಿರ್ಯಾದಿಯು ತನ್ನ ಜಮೀನಿನಲ್ಲಿ ಕೆಲಸವನ್ನು ಮುಗಿಸಿ ನಿಲ್ಲಿಸಿದ್ದ ಸರಿಸುಮಾರು ಒಂದು ಲಕ್ಷ ಇಪ್ಪತ್ತು ಸಾವಿರ ಮೌಲ್ಯದ ಟ್ಯಾಕ್ಟರ್ ಟ್ರೈಲರ್ ಅನ್ನು ಕಳ್ಳತನ ಮಾಡಿಕೊಂಡು ಹೋಗಿರುವ ವಿಚಾರಕ್ಕೆ ಸಂಬಂಧಿಸಿದಂತೆ ಮೇಲೆ ಬೆನ್ನೂರು ಪೊಲೀಸ್ ಠಾಣೆಯಲ್ಲಿ ದೂರನ್ನ ದಾಖಲಿಸಿರುತ್ತಾರೆ. ದೂರುದಾರರಿಂದ ದೂರನ್ನು ದಾಖಲಿಸಿಕೊಂಡ ಮೇಲೆ ಬೆನ್ನೂರು ಪೊಲೀಸ್ ಇಲಾಖೆಯವರು ಗುನ್ನೆ ನಂಬರ್ 174/2023 ಕಲಾಂ 379 ಐಪಿಸಿ ಸೆಕ್ಷನ್ ಅಡಿಯಲ್ಲಿ ದೂರನ್ನು ದಾಖಲಿಸಿಕೊಂಡು ತನಿಖೆಯನ್ನು ಕೈಗೆತ್ತಿಕೊಂಡಿರುತ್ತಾರೆ.

ಆರೋಪಿಗಳನ್ನ ಪತ್ತೆ ಹಚ್ಚುವ ಕಾರ್ಯಕ್ಕಾಗಿ ದಾವಣಗೆರೆ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳಾದ ಶ್ರೀಮತಿ ಉಮಾ ಪ್ರಶಾಂತ್ ಐಪಿಎಸ್, ಹೆಚ್ಚುವರಿ ಪೋಲಿಸ್ ಅಧಿಕ್ಷಕರಾದ ಶ್ರೀ ವಿಜಯಕುಮಾರ್ ಎಂ ಸಂತೋಷ್ ಮತ್ತು ದಾವಣಗೆರೆ ಗ್ರಾಮಾಂತರ ಉಪವಿಭಾಗದ ಪೊಲೀಸ್ ಉಪಾಧ್ಯೀಕ್ಷಕರಾದ ಶ್ರೀ ಬಿ ಎಸ್ ಬಸವರಾಜ್ ಅವರ ಮಾರ್ಗದರ್ಶನದಲ್ಲಿ ಹಾಗೂ ಹರಿಹರ ವೃತ್ತ ನಿರೀಕ್ಷಕರಾದ ಶ್ರೀ ಸುರೇಶ್ ಸಗರಿ ಮತ್ತು ಮೇಲೆ ಬೆನ್ನೂರು ಪೊಲೀಸ್ ಠಾಣಾಧಿಕಾರಿ ಶ್ರೀ ಪ್ರಭು ಡಿ ಕೆಳಗಿನಮನಿ ಇವರ ನೇತೃತ್ವದಲ್ಲಿ ಆರೋಪಿತರ ಪತ್ತೆಗಾಗಿ ಒಂದು ವಿಶೇಷತಂಡವನ್ನು ರಚಿಸಲಾಗಿರುತ್ತದೆ.
ದಿನಾಂಕ 7.11.2023 ರಂದು ಮೆಲೆಬೆನ್ನೂರು ಪೊಲೀಸ್ ಠಾಣಾಧಿಕಾರಿ ಪ್ರಭು ಡಿ ಕೆಳಗಿನ ಮನಿ ಮತ್ತು ಸಿಬ್ಬಂದಿಯವರ ಮಿಂಚಿನ ಕಾರ್ಯಾಚರಣೆಯಿಂದ ಐದು ಜನ ಆರೋಪಿತರ ಪೈಕಿ ಇಬ್ಬರನ್ನ ಬಂಧಿಸುವಲ್ಲಿ ಯಶಸ್ವಿಯಾಗಿರುತ್ತಾರೆ.

ಬಂದಿತ ಆರೋಪಿಗಳಾದ 23 ವರ್ಷ ವಯಸ್ಸಿನ ಶಿವಮೊಗ್ಗ ಜಿಲ್ಲೆಯ , ಶಿವಮೊಗ್ಗ ತಾಲ್ಲೂಕು ವ್ಯಾಪ್ತಿಯ ಕೋಮ್ಮನಹಾಳ್ ಗ್ರಾಮದ ಮನೋಜ್ ಹಾಗೂ ಅದೇ ಗ್ರಾಮದ 21 ವರ್ಷ ವಯಸ್ಸಿನ ಮಧು ಎಂಬ ಇಬ್ಬರು ಆರೋಪಿಗಳನ್ನು ಬಂದಿಸುತ್ತಾರೆ.

ಈ ಇಬ್ಬರು ಆರೋಪಿಗಳು ಮೇಲೆಬೆನ್ನೂರು ಪೊಲೀಸ್ ಠಾಣಾ ಸರಹದ್ದಿನಲ್ಲಿ ಎರಡು ಟ್ರೈಲರ್ ಗಳನ್ನು ಅದೇ ರೀತಿ ಹರಿಹರ ಗ್ರಾಮಾಂತರ ಪೊಲೀಸ್ ಠಾಣಾ ಸರಹದ್ದಿನಲ್ಲಿ ಒಂದು ಟ್ರೈಲರ್ ಹಾಗೂ ನ್ಯಾಮತಿ ಪೊಲೀಸ್ ಠಾಣೆಯ ಸರಹದ್ದಿನಲ್ಲಿ ಎರಡು ಟೈಲರ್ ಕಳ್ಳತನ ಪ್ರಕರಣಗಳು ಹಾಗೂ ಹೊನ್ನಾಳಿ ಪೋಲಿಸ್ ಠಾಣಾ ಸರಹದ್ದಿಗೆ ಸಂಬಂಧಿಸಿದಂತೆ ಎರಡು ಟ್ರೈಲರ್ ಕಳ್ಳತನ ಪ್ರಕರಣಗಳು ಪತ್ತೆ ಮಾಡಿ ಸರಿಸುಮಾರು 14 ಲಕ್ಷ ಬೆಳೆಬಾಳುವ ಒಟ್ಟು ಏಳು ಟ್ರೈಲರ್ ಗಳನ್ನು ನ್ಯಾಮತಿ ಪೊಲೀಸ್ ಠಾಣಾ ಸರಹದ್ದಿನ ಒಂದು ತೇಗದ ಮರ ಕಳ್ಳತನ ಪ್ರಕರಣವನ್ನು ಭೇದಿಸಿ ಪ್ರಕರಣಕ್ಕೆ ಸಂಬಂಧಿಸಿದಂತೆ 35 ಸಾವಿರ ರೂಪಾಯಿ ನಗದು ಹಣವನ್ನು ವಶಪಡಿಸಿಕೊಂಡು ಆರೋಪಿತರನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸುವ ಮೂಲಕ ಬಹುದೊಡ್ಡ ಕಳ್ಳತನ ಪ್ರಕರಣವನ್ನು ಭೇದಿಸುವಲ್ಲಿ ನೆಲೆಬೆನ್ನೂರು ಪಿ ಹೆಚ್ ಐ ಪ್ರಭು ಡಿ ಕೆಳಗಿನ ಮನಿ ಹಾಗೂ ಸಿಬ್ಬಂದಿಗಳು ಯಶಸ್ವಿಯಾಗಿರುತ್ತಾರೆ.
ಸದರಿ ಟ್ರೈಲರ್ ಮತ್ತು ತೇಗದ ಮರದ ಕಳ್ಳತನ ಪ್ರಕರಣಗಳನ್ನು ಹರಿಹರ ವೃತ್ತ ನಿರೀಕ್ಷಕರಾದ ಶ್ರೀ ಸುರೇಶ್ ಸಗರಿ ಮತ್ತು ಮೆಲೆಬೆನ್ನೂರು ಪೊಲೀಸ್ ಠಾಣೆಯ ಪಿಎಸ್ಐ ಶ್ರೀ ಪ್ರಭು ಡಿ ಕೆಳಗಿನಮನಿ, ಸಿಬ್ಬಂದಿಯವರಾದ ಫೈರೋಜ್ ಖಾನ್ ,ವೆಂಕಟರಮಣ, ಲಕ್ಷ್ಮಣ್, ರಾಜಶೇಖರ್, ಸಂತೋಷ್ ಕುಮಾರ್, ಪ್ರದೀಪ್, ಹನುಮಂತರೆಡ್ಡಿ, ರಂಗಪ್ಪ, ಶ್ರೀ ರಾಘವೇಂದ್ರ, ಶ್ರೀ ಶಾಂತರಾಜ್, ಶಿವಕುಮಾರ್, ರಾಜಪ್ಪ ರವರ ತಂಡವು ಈ ಕಳ್ಳತನ ಪ್ರಕರಣವನ್ನು ಭೇದಿಸುವಲ್ಲಿ ಯಶಸ್ವಿಯಾಗಿರುತ್ತಾರೆ 

ಈ ಮೇಲ್ಕಂಡ ಅಧಿಕಾರಿ ಮತ್ತು ಸಿಬ್ಬಂದಿಗಳನ್ನು ದಾವಣಗೆರೆ ಜಿಲ್ಲಾ ಪೊಲೀಸ್ ವರಿಷ್ಠ ಅಧಿಕಾರಿಗಳಾದ ಶ್ರೀಮತಿ ಉಮಾ ಪ್ರಶಾಂತ್ ಇವರು ಮೆಚ್ಚುಗೆ ವ್ಯಕ್ತಪಡಿಸಿ ಶ್ಲಾಘಿಸಿರುತ್ತಾರೆ.

Post a Comment

0 Comments