ಹರಿಹರ ನಗರಸಭೆಯ ಕಚೇರಿಯ ಮೇಲೆ ಲೋಕಾಯುಕ್ತರ ದಾಳಿ. ಹಣ ಸ್ವೀಕರಿಸುವ ವೇಳೆ ರೆಡ್ ಅಂಡ್ ಆಗಿ ಲೋಕಾಯುಕ್ತರ ಬಲೆಗೆ ಬಿದ್ದ ಬಸವರಾಜ್ ಐಗೂರ್.!!



ಮಂದಾರ ನ್ಯೂಸ್: ಹರಿಹರ ನಗರಸಭೆಯ ಕಛೇರಿಯ ಮೇಲೆ ಲೋಕಾಯುಕ್ತರ ದಾಳಿ. ಕರಿಬಸಪ್ಪ ಎಂಬ ವ್ಯಕ್ತಿಯಿಂದ 2 ಲಕ್ಷ ರೂಪಾಯಿ ಹಣ ಸ್ವೀಕರಿಸುವಾಗ ಟ್ರ್ಯಾಪ್ ಯಾದ ಹರಿಹರ ನಗರಸಭೆಯ ಆಯುಕ್ತರಾದ ಬಸವರಾಜ ಐಗೂರು.

ಎರಡು ಲಕ್ಷ ರೂಪಾಯಿ ಪಡೆಯುವಾಗ ಹರಿಹರ ನಗರಸಭೆ ಆಯುಕ್ತ ಲೋಕಾಯುಕ್ತ ಬಲೆಗೆ ಬಿದ್ದಿದ್ದಾರೆ.

ಬಸವರಾಜ್ ಐಗೂರು ಎಂಬುವವರೇ ಲೋಕಾಯುಕ್ತ ಪೊಲೀಸ್ ಬಲೆಗೆ ಬಿದ್ದ ನಗರಸಭೆ ಕಮೀಷನರ್. ಸಾಮಾಗ್ರಿ ಸರಬರಾಜು ‌ಗುತ್ತಿಗೆದಾರ ಕರಿಬಸಪ್ಪ ಎಂಬುವವರಿಂದ ಎರಡು ಲಕ್ಷ ರೂಪಾಯಿ ಲಂಚ ಪಡೆಯುವಾಗ ಲೋಕಾಯುಕ್ತ ಪೊಲೀಸರ ದಾಳಿ ನಡೆಸಿದ್ದಾರೆ. ಹರಿಹರ ನಗರದ ವಿದ್ಯಾನಗರದಲ್ಲಿರುವ ವಾಸವಿದ್ದ ರೂಮಿನಲ್ಲಿ ಲೋಕಾಯುಕ್ತ ಪೊಲೀಸರ ದಾಳಿ ನಡೆಸಿ ವಶಕ್ಕೆ ಪಡೆದಿದ್ದಾರೆ.

ಸಾಮಗ್ರಿ ಸರಬರಾಜು ಮಾಡಲು ಕರಿಬಸಪ್ಪ ಎಂಬ ಗುತ್ತಿಗೆದಾರ ಅನುಮತಿಗೆ ಹೋಗಿದ್ದರು. ಈ ವೇಳೆ ಎರಡು ಲಕ್ಷ ರೂಪಾಯಿಗೂ ಹೆಚ್ಚು ಹರಿಹರ ನಗರಸಭೆ ಆಯುಕ್ತ ಬಸವರಾಜ್ ಐಗೂರು ಬೇಡಿಕೆ ಇಟ್ಟಿದ್ದರು. ಇಂದು 2 ಲಕ್ಷ ರೂಪಾಯಿ ಲಂಚ ಪಡೆಯುವಾಗ ಲೋಕಾಯುಕ್ತ ಪೊಲೀಸರು ದಾಳಿ ನಡೆಸಿ ವಶಕ್ಕೆ ಪಡೆದು ವಿಚಾರಣೆ ನಡೆಸುತ್ತಿದ್ದಾರೆ

Post a Comment

0 Comments