ಮಾನವೀಯ ಮೌಲ್ಯಗಳನ್ನು ಸಾರಿದ ಬುದ್ಧ ಪೌಂಡೇಶನ್: ಬಾಲಯೋಗಿ ಶ್ರೀ ಜಗದೀಶ್ವರ ಮಹಾಸ್ವಾಮಿಗಳು.


ಸ್ವಾತಂತ್ರ್ಯ ದಿನಾಚರಣೆಯ ಅಂಗವಾಗಿ ರಕ್ತದಾನ ಶಿಬಿರ

ಹರಿಹರ. ಆ.15: ಸಮಾಜದಲ್ಲಿ ಮಾನವೀಯ ಮೌಲ್ಯಗಳು, ಸಹಕಾರ, ವಿಶ್ವಾಸ ಹಾಗೂ ಶೈಕ್ಷಣಿಕ ಅಭಿವೃದ್ಧಿಯನ್ನು ಹೆಚ್ಚಿಸುವ ನಿಟ್ಟಿನಲ್ಲಿ ಬುದ್ಧ ಪೌಂಡೇಶನ್ (ರಿ.), ಹರಿಹರ ಇವರು ಕಾರ್ಯಗಳನ್ನು ನಡೆಸುತ್ತಿರುವ ಕುರಿತು ಪರಮಪೂಜ್ಯ ಬಾಲಯೋಗಿ ಶ್ರೀ ಜಗದೀಶ್ವರ ಮಹಾಸ್ವಾಮಿಗಳು ಶ್ಲಾಘನೀಯ ವ್ಯಕ್ತಪಡಿಸಿದ್ದರು.

79ನೇ ಸ್ವಾತಂತ್ರ್ಯ ದಿನಾಚರಣೆಯ ಅಂಗವಾಗಿ ಬುದ್ಧ ಫೌಂಡೇಶನ್ (ರಿ.), ಹರಿಹರ ಇವರು ಲಯನ್ಸ್ ಕ್ಲಬ್ ಆಸರೆ ದಾವಣಗೆರೆಯವರ ಸಹಯೋಗದೊಂದಿಗೆ ನಗರದ ತಹಶೀಲ್ದಾರ್ ಅವರ ಕಚೇರಿ ಆವರಣದಲ್ಲಿ ಹಮ್ಮಿಕೊಳ್ಳಲಾಗಿದ್ದ ರಕ್ತದಾನ ಶಿಬಿರದಲ್ಲಿ ಪಾಲ್ಗೊಂಡು ಶ್ರೀಗಳು ಮಾತನಾಡಿದರು.
ನಿಮ್ಮ ಈ ನಿರ್ಣಯವು ಹಲವರ ಬದುಕಿಗೆ ಬೆಳಕನ್ನು ತರುವಂತ ಹಾಗೂ ಆರೋಗ್ಯಕರ ಸಮಾಜ ನಿರ್ಮಾಣಕ್ಕೆ ಸಹಕಾರವಾಗಿರುತ್ತದೆ.  ಈ ವಿಶಿಷ್ಟ ಕಾರ್ಯಕ್ರಮದಲ್ಲಿ ಹಲವಾರು ಜನರು ತಮ್ಮ ಅಮೂಲ್ಯವಾದ ರಕ್ತವನ್ನು ದಾನ ಮಾಡಿ ಮಾನವೀಯತೆಗೆ ಮಾದರಿ ಉದಾಹರಣೆಯಾಗಿ ಹೊರಹೊಮ್ಮಿದ್ದಾರೆ. ನಾಗರಿಕರಲ್ಲಿ ಸೇವಾ ಮನೋಭಾವನೆ ಹುಟ್ಟಿಸುವುದರಲ್ಲಿ ಬಹುದೊಡ್ಡ ಹಂತವಾಗಿದೆ. ಇದೇ ರೀತಿ ನಿಮ್ಮ ಟ್ರಸ್ಟ್ ನ ಕೆಲಸ ಕಾರ್ಯಗಳು ಸಾಗಲಿ. 
ಆಡಂಬರದ ಆಚರಣೆಗಳನ್ನು ಮಾಡದೆ ರಕ್ತದಾನ ಶಿಬಿರವನ್ನು ಆಯೋಜಿಸುವ ಮೂಲಕ ಸ್ವಾತಂತ್ರ್ಯ ದಿನಾಚರಣೆಯನ್ನು ಅರ್ಥಪೂರ್ಣವಾಗಿ ಆಚರಿಸಿದ್ದ ಬಗ್ಗೆ ಶ್ರೀಗಳು ಅಭಿವ್ಯಕ್ತಪಡಿಸಿದ್ದರು. 
ಬುದ್ಧ ಫೌಂಡೇಶನ್ ನ ಅಧ್ಯಕ್ಷರಾದ ಮಹೇಶ್ ಕುಮಾರ್ ಎನ್. ಇವರು ಮಾತನಾಡಿ, ಸದೃಢ ಹಾಗೂ ಸುಭದ್ರ ಸಮಾಜ ನಿರ್ಮಾಣವೇ ನಮ್ಮ ಟ್ರಸ್ಟ್ ನ ದೈಯೋದ್ದೇಶವಾಗಿದೆ. ತುರ್ತು ಹಾಗೂ ಅಗತ್ಯ ರೋಗಿಗಳಿಗೆ ರಕ್ತದಾನ ಮಾಡುವ ಮೂಲಕ ಸಾವಿರ ಕನಸುಗಳನ್ನು ನನಸಾಗಿಸುವ ನಿಟ್ಟಿನಲ್ಲಿ ಇಂದಿನ ಶಿಬಿರವನ್ನು ಆಯೋಜಿಸಲಾಗಿದೆ ಎಂದು ತಿಳಿಸಿದರು. 

ಸದರಿ ರಕ್ತದಾನ ಶಿಬಿರಕ್ಕೆ ಆಗಮಿಸಿ ಕಾರ್ಯಕ್ರಮವನ್ನು ಯಶಸ್ವಿ ಮಾಡಿಕೊಟ್ಟ ಎಲ್ಲಾ ಗಣ್ಯರಿಗೂ, ರಕ್ತದಾನಿಗಳಿಗೂ ಅಭಿನಂದನೆಗಳನ್ನು ಸಲ್ಲಿಸಿದರು.
ಸದರಿ ಶಿಬಿರದಲ್ಲಿ ಹರಿಹರದ ಶಾಸಕರಾದ ಬಿ.ಪಿ.ಹರೀಶ್, ಮಾಜಿ ಶಾಸಕರಾದ ಹೆಚ್.ಎಸ್. ಶಿವಶಂಕರ್, ಗ್ಯಾರಂಟಿ ಯೋಜನೆಗಳ ಅನುಷ್ಠಾನ ಪ್ರಾಧಿಕಾರದ ಅಧ್ಯಕ್ಷರಾದ ನಂದಿಗಾವಿ ಶ್ರೀನಿವಾಸ್, ಮಾಜಿ ಜಿಲ್ಲಾ ಪಂಚಾಯತ್ ಅಧ್ಯಕ್ಷರಾದ ವೀರೇಶ್ ಹನಗವಾಡಿ, ಲಯನ್ಸ್ ಕ್ಲಬ್ ಆಸರೆ ದಾವಣಗೆರೆಯ ಅಧ್ಯಕ್ಷರಾದ ವೀರೇಶ್ ಎಸ್., ವಲಯ ಅಧ್ಯಕ್ಷರಾದ ಮೌನೇಶ್ ಎನ್.ಎಚ್., ಬುದ್ಧ ಫೌಂಡೇಶನ್ನ ಪ್ರಧಾನ ಕಾರ್ಯದರ್ಶಿಗಳಾದ ಷಣ್ಮುಖ ಎಸ್. ಸೇರಿದಂತೆ ಕಾಂಗ್ರೆಸ್ ಮುಖಂಡರಾದ ತಿಪ್ಪೇಶ್, ಬಿಜೆಪಿ ಮುಖಂಡರಾದ ಪ್ರಭಾಕರ್ ವೈ.ಬಿ., ಜೆಡಿಎಸ್ ಮುಖಂಡರಾದ ಸದಾಶಿವ, ಲಕ್ಷ್ಮೀನಾರಾಯಣ, ಅಭಿಷೇಕ್, ಆಕಾಶ್, ಗಗನ್, ಪ್ರಜ್ವಲ್, ಶ್ರೀನಿವಾಸ್ ಮತ್ತಿತರರು ಹಾಜರಿದ್ದರು.

Post a Comment

0 Comments